Sunday, February 18, 2018
ಆರಾಧನೆ
Thursday, October 16, 2014
ಮುರುಡೇಶ್ವರದ ಯಕ್ಷ ರಕ್ಷೆಯ ಹರಿಕಾರರಿಗೊಂದು ನಮನ
ಯಕ್ಷ ರಕ್ಷೆಯ ಹರಿಕಾರನಿಗೊಂದು ನುಡಿ ನಮನ ,ಇಂತಿ ನಿಮ್ಮ ಕಲಾವಿದ ,
Friday, November 29, 2013
ಮನಸ್ಥಿತಿ
ಮನಸು ಮನಸನೆ ಅರಿಯದ ನಿನ್ನಿಸ್ಥಿತಿ ,
ಅರುಹದೆ ನುಡಿವೆ ಇಲ್ಲದೆ ಇತಿಮಿತಿ ,
ಸತ್ಯವನರಿಯುತ ಉಸುರು ಇರಲಿ ಮತಿ .
ಗಾಳಿಯ ಮಾತಿಗೆ ಲಾಗವ ಹಾಕದಿರು ,
ಅರಿಯದೆ ಅನ್ಯ ಮನಸನು ದೂರದಿರು,
ಕುರುಡು ಪ್ರೀತಿಯ ಹೊದ್ದು ಮಲಗದಿರು,
ಅನ್ಯರ ಕಷ್ಟವ ನೀ ಅರಿಯುತಿರು.
ಸಹಾಯವೆಂಬ ಜೀವ ಸದಾ ನಿನ್ನೊಲಿರಲಿ,
ಸ್ನೇಹವೆಂಬ ಅಮೂಲ್ಯ ಮುತ್ತು ಒಡೆಯದಿರಲಿ ,
ಅರಿತು ನುಡಿವ ಮಾತು ಹಿತವಾಗಿರಲಿ,
ನೋವ ಕೊಡುವ ಬುದ್ದಿ ದೂರವಿರಲಿ.
ಜೀವ ಕೊಡುವ ಮನಸನು ಕಾಪಾಡು ,
ಜೀವನವನೆ ನುಂಗುವ ಕುಹಕಿಯ ಬಿಸಾಡ್ಹು ,
ಮನಸೇ ನೀ ಮನಸಲಿ ವೂಲುಮೆಯಿಡು ,
ಮಾತಿನಲಿ ನೋಯಿಸುವ ಗುಣ ಬಿಡುಬಿಡು.
Friday, May 17, 2013
ಸ್ನೇಹದ ನೋವು ನಲಿವು
ಓಕೋಗಿಲೆಯೇ ಹೇಗೆ ಮರೆಯಲಿ ನಿನ್ನ
ಮತ್ತೆ ನಿನ್ನ ಗೆಳೆತನದ ನೆನಪನ್ನ
ಮರೆಯಲಾಗದು ನನ್ನ ಮುದ್ದು ಚಿನ್ನ
ನಿಗೂಡ ನಿನ್ನ ಹುಟ್ಟು ಕಥೆ
ತಾಯಿಯಾರ್ರೋ ಆದರೂ ನಿನಗಿಲ್ಲ ವ್ಯಥೆ
ಎಂದೆಂದು ಹೊಳೆಯುವುದು ಸ್ವರವೆಂಬ ಸ್ವರ್ಣಲತೆ
ನಾಕಾಗೆಯಾದರು ಒಡನಾಟವು ಮರೆಯಾಯ್ತೆ
ಓಕೋಗಿಲೆ ಸ್ವರದ ಅಹಂಕಾರ ನಿನಗಿಲ್ಲ
ಕಾಗೆಯೆಂದು ನೀ ಎನ್ನ ಕಂಡಿಲ್ಲ
ಬೆಳೆಯ ಬೆಳೆಯುತ್ತ ದಯಾದಿಗಲು ನಾವಗಿಲ್ಲ
ಅಗಲುವಿಕೆಯೆಂಬ ಸಂಕಟ ಕೊನೆಗೂ ಬಿಡಲಿಲ್ಲ
ಮನದಲ್ಲಿ ಉಳಿದಿಹುದು ಅನೇಕ ವಿಷ್ಯ
ಹೇಳಲಾರೆ ಕೋಗಿಲೆ ಕಹಿ ಸತ್ಯ
ಸಿಹಿ ಸುಳ್ಳು ಭಾದಿಸದು ಕೇಳಯ್ಯ
ನಗುನಗುತ ಬಾಳು ಎಂದೆಂದು ನೀನಯ್ಯ
Monday, May 13, 2013
ಸ್ನೇಹದ ಮೌಲ್ಯ
ಓಗೆಳೆಯ ಅಗಲಿ ಹೋಗುವುದು ಅನಿವಾರ್ಯ
ಮರೆಯಬೇಡ ಸ್ನೇಹದಿ ಗೈದ ಕಾರ್ಯ
ಉದ್ಯೊಗಪರ್ವದಿ ಮೆರೆಯಲಿ ನಿನ್ನ ಶೌರ್ಯ
ಎಲ್ಲ ಪಡೆಯಲಿ - ಅರಿಯಲಿ ನಿನ್ನ ಮೌಲ್ಯ .
ಪ್ರೀತಿ ತುಂಬಿದ ಮನದಲಿ ಹರಸುವೆನು
ಯಶಸ್ಸು ನಿನ್ನದಾಗಲಿ ಎಂದು ಬೇಡುವೆನು
ಅಗಲಿಕೆ ತರುತಿಹುದು ಕಣ್ಣೀರ ಹನಿಯನು
ನಿನ್ನ ಉತ್ತಮ ಭವಿಷ್ಯಕ್ಕಾಗಿ ಸಹಿಸಿಹೆನು
ಸುಖ- ದುಃ ಖಗಳೆರಡು ಬದುಕ ಹಾದಿಯಲಿ
ಗೆದ್ದು ಬಾ ಬದುಕೆಂಬ ಯುದ್ದದಲಿ
ಏರಲಿ ಕೀರ್ತಿ ಪತಾಕೆ ಹಾರಲಿ
ಕಾಯುತಿರುವೆನು ಎಂದೆಂದೂ ನೀಬರುವ ಹಾದಿಯಲಿ
Thursday, May 9, 2013
ಅರಿಯೋ ಎನ್ನ ಮನ
ನುಡಿಯೆoಬ ರಕ್ತ ಸ್ನೇಹದ ನರದೊಳಗೆ
ಸಂಚಲನವಾಗಬೇಕು ಗೆಳೆಯರಿಬ್ಬರೊಳಗೆ
ಹರಿಸುವವರ್ ಯಾರು ಹೇಗೆ ಆಬಗೆ
ಸ್ನೇಹವು ಹತ್ತಿರವಿದ್ದಾಗ ಸಂತಸದ ನಗೆ
ದ್ವೇಷವು ದೂರವಾದರೆ ಸ್ನೇಹಕ್ಕೆ ಬೆಲೆ
ನಗುವು ಕೊಡುವುದು ಜೀವನಕ್ಕೆ ಕಳೆ
ಒಂದಾಗುವುದೇ ಸ್ನೇಹ ಸ್ಪೂರ್ತಿಯ ಸೆಲೆ
ಹೃದಯದ ನೋವ ತಿಳಿವುದು ಸ್ನೇಹ
ಬಿಡು ಬಿಡು ದುರಲೋಚನೆಗಳ ಮೋಹ
ಕೊಡು ಕೊಡು ಸ್ನೇಹ ಹಸ್ಥವ ಗೆಳೆಯ
ನಿಷ್ಕಲ್ಮಶವಯ್ಯೆ ಅರಿಯೋ ಎನ್ನ ಮನ
Thursday, February 11, 2010
ಪ್ರೀತಿಯ ಮುಸುಕು
ಮುಸುಕ ತೆಗೆಯೇ ಮಮತೆಯ ಹೂವೇ .
ಮಂಜು ಕವಿದ ಪ್ರೀತಿಯ ಪ್ರಕೃತಿ
ಭಾವನೆಗಳ ಬಿಚ್ಚಿಡುವ ಪ್ರಣಯದ ರೀತಿ
ಪ್ರೇಯಸೀ ನೀ ಎಲೆಯ ಮೇಲೀನ ಹನಿ
ಬದುಕಲಾರೆನು ಕೈಜಾರಿದರೆ ಬಾ ರಮಣಿ.
ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .
ಹಾರುತ ಬರುತಿರೆ ನಿನ್ನಯ ಬಳಿಗೆ
ಸಿಲುಕಿಹೇ ನಿನ್ನಯ ಪ್ರೀತಿಯ ಸುಳಿಗೆ
ಬರಬಾರದೆ ಕೈ ಹಿಡಿದು ಸನಿಹಕೆ
ಪ್ರೀತಿಯ ತೇರನು ನೋಡುವ ಅನಿಸಿಕೆ.
ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .
ಮೊದಲ ಮಳೆಗೆ ಹಸಿಯಾದ ಭೂಮಿ
ಮಲ್ಲಿಗೆಯಾಗಿ ಮಾಮರವ ತಬ್ಬಿಬಾ ಪ್ರೇಮಿ
ಅರಳಿ ಚೆಲ್ಲಬಾರದೆ ನಗೆಯ ಚೆಲುವೆ
ಈಗಲಾದರೂ ಮುಸುಕ ತೆಗೆ ತಬ್ಬಿದ ಹೂವೇ .
ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .
Wednesday, February 3, 2010
ಮನವು ಮರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ
ಮನದ ಮುರುಭೂಮಿ ತುಂಬೆಲ್ಲ ನಿರಾಸೆಯ ಧೂಳು
ಭಾರವೆನಿಸಿದೆ ಭಾಳು ಬರಿ ಗೋಳು
ಹೇಗೆ ತಿಳಿಸಲಿ ನಿನಗೆ ಪ್ರೀತಿಯ ಹೂವೇ
ಬರಬೇಡ ಈ ಮರುಭೂಮಿಗೆ ಸುಡುವೆ ನೀನೇ
ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ
ನಿನ್ನ ಸ್ನೇಹದ ನೆನಪಿನ ಇಬ್ಬನಿ
ಮಿಲನವಾಗುತ ಪ್ರೀತಿಯ ಹನಿ ಹನಿ
ಸೇರಭಾರದೆ ಕಾರ್ಮೋಡದ ಖನಿ
ತೇಲುತಿಹೆ ಸ್ನೇಹ ಮಳೆಯ ಸುರಿಸದೆ ಸುಮ್ಮನಿ
ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ
ಹಪ ಹಪಿಸುತಿದೆ ಮನವು ಪ್ರೀತಿಯ ಹನಿಗೆ
ಬೆಳಕ ತರಬಾರದೆ ಮಿಂಚಿ ಪ್ರೇಮ ಮಂದಿರದೊಳಗೆ
ಕತ್ತ್ತಲಾಗಿದೆ ಬದುಕು ನೀನಿಲ್ಲದೆ ನನಗೆ
ಹುಡುಕುತಿರುವೇ ಪ್ರೀತಿಯ ನೆರಳ ನೀ ಬರುವವರೆಗೆ
ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ
Wednesday, December 23, 2009
ಬರಡು ಜಗದ ಬದುಕು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.
ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.
ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.
Monday, December 21, 2009
ಬಾಡಿ ಹೋದ ಬಳ್ಳಿ
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .
ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .
ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.
Monday, October 12, 2009
ಓ ಗೆಳತಿಯೇ!
ನಿನಗೆ ಪ್ರತಿ ದಿನವು ಶುಭ ಕೋರುವೆ
ವರುಷವು ಹರುಷವ ಹೊತ್ತು ಬರಲಿ ಬಾಳಲಿ
ಸದಾ ಜಯದ ಜ್ಯೋತಿಯು ಬೆಳಗಲಿ .
ಸದಾ ಏರುಥಿರು ಯಶಸ್ಸಿನ ತೇರನು
ಭದ್ರಗೊಳಿಸು ಸ್ನೇಹ ಭಾಂದವ್ಯದ ಬೇರನು
ಅನರ್ಥದೆಡೆಗೆ ಬದುಕ ಭಾಗಲು ಬಿಡದಿರು
ನಗುವ ಸಾಗರದಿ ತೇಲುತಿರು.
ಸ್ನೇಹದ ಬಂಗಾರ ಹೊಳೆಯುತಿರಲಿ
ಆ ಅಮೋಘ ಹೊಳಪು ಮಾಸದಿರಲಿ
ಪ್ರೀತಿಯ ಬುಗ್ಗೆ ಚಿಮ್ಮುತಿರಲಿ
ಅದರಿಂದ ಬದುಕ ಬಯಲು ಹಸಿರಾಗಲಿ .
Monday, September 7, 2009
ಸ್ನೇಹ ಜ್ಯೋತಿ
ಸ್ನೇಹವೆಂಬ ಎಣ್ಣೆಯನ್ನು
ಹತ್ತಿಯಿಂದ ಹೀರಿ ತೆಗೆದು
ಭಾಂದವ್ಯದಿ ಉರಿಯುತಿದೆ
ಬೆಳಕನೀವ ಜ್ಯೋತಿಯು .
ಗೆಳತಿಯೆಂಬ ಜ್ಯೋತಿಯು
ತನ್ನ ಸುತ್ತ ನೆರಳನಿಟ್ಟು
ಸ್ನೇಹ ಜಗಕೆ ಬೆಳಕ ಕೊಟ್ಟು
ಉತ್ಸಾಹದಿ ಉರಿಯುತಿದೆ
ಸರಿ ಧಾರಿತೋರ್ವ ಜ್ಯೋತಿಯು.
ಶುಬ್ರವಾದ ಜ್ಯೋತಿಯು
ಕರುಣ ಶಕ್ತಿ ಬೆಳಕ ಬೀರಿ
ಮೂಢ ಭಾವ ಭಯವ ತೂರಿ
ಶಾಂತವಾಗಿ ಉರಿಯುತಿದೆ
ಸ್ನೇಹವೆಂಬ ಜ್ಯೋತಿಯು.
Tuesday, August 25, 2009
ಸಂಜೆ ಮತ್ತಿನೊಳು ಕೂಸು ಬಡವಾಯ್ತು
ಅದಾಗಲೇ ನಮ್ಮ ಬೆಂಗಳೂರು ಕತ್ತಲೆಯ ಸೆರಗಿನೊಳಗೆ ಜಾರಿತ್ತು .ನಮ್ಮ ಅಂಗಡಿಗೆಯ ಗಿರಾಕಿ ಒಬ್ಬರು ಮಗುವೊಂದನ್ನು ಎತ್ತಿ ತಿಂಡಿಗಳನ್ನು ಕೊಟ್ಟರು .ಅದಾಗಲೇ ಕಂಡ ಮಗುವಿನ ನೆನಪು ಮನದೊಳಗೆ ಮತ್ತೆ ಮರಳಿತ್ತು.ಆ ಗಿರಾಕಿ ಮಾನವೀಯತೆಯ ಮಮಕಾರದಿಂದ ಮಗುವಿನ ಹೆತ್ತವರನ್ನು ಅತ್ತಿತ್ತ ಹುಡುಕಲು ಆರಂಭಿಸಿದರು.ಆಗಲೇ ತಿಳಿದಿದ್ದು ಆ ಮಗುವಿನ ತಾಯಿ ಪಾನಾಮತ್ತಲಾಗಿ ಚರಂಡಿಯಲ್ಲಿ ಬಿದ್ದಿದ್ದಳು . ಆಕೆ ಅವಿದ್ಯಾವಂತ ಮಹಿಳೆ ಆದರು ಭಾರತೀಯ ನಾರಿಯ ಆ ಸದ್ಗುಣ ಮಾಯವಾಗಿ ತನ್ನ ಕಂದಮ್ಮನನ್ನು ಯೋಚಿಸದೆ ಮಾಡಿದ ದುರ್ಭುದ್ದಿಯನ್ನು ಯಾರಿಗೆ ಹೇಳಲಿ ? .
ಅತ್ತ ಮುಗ್ದ ಮಗು ಇತ್ತ ಏನ ಹೇಳಿದರು ಅರ್ಥವಾಗದ ತಾಯಿಯ ಸ್ಥಿತಿ , ಅದೊಂದು ಸಂದಿಘ್ದದದ ಪರಿಸ್ಥಿತಿ ನಮ್ಮ ಗಿರಾಕಿಯದ್ದು .ಆಮೇಲೆ ಅವರು ಆಕೆಯ ತಲೆಯ ಮೇಲೆ ನೀರನು ಹೊಯ್ದು ಸ್ವಲ್ಪ ಹೊತ್ತಿನ ನಂತರ ಆಕೆಗೆ ಪ್ರಪಂಚದ ಅರಿವಯಿಥೆನೋ ? ಎನನ್ನು ಹೇಳದೆ ಮಗುವನ್ನು ಎತ್ತಿಕೊಂಡು ಲಘುಬಗೆಯಿಂದ ಹೊರಟಳು.....! .ಅಲ್ಲೇ ಮುಂದೆ ಹೋಗುತ್ತ ವ್ಯಕ್ತಿಯೋರ್ವನನ್ನು ಆಕೆ ಎತ್ತುತ್ತಿದ್ದಳು ಆಗಲೇ ತಿಳಿದಿದ್ದು ಆಕೆಯ ಗಂಡನೂ ಕುಡಿದು ಬಿದ್ದಿದ್ದ ಎಂದು.ಈ ಪನಮತ್ತಿನ ದಂಪತಿಗಳ ನಡುವೆ ಪಾಪ ಏನೂ ಅರಿಯದ ಕೂಸು ಬಡವಾಯ್ತು .
Thursday, May 28, 2009
ಮಾತು ಕೇಳದ ಮನಸ್ಸು
ಆ ಮನಸ್ಸೇ ಹಾಗೆ ಆಸೆಗಳ ಆಶಾಕಿರಣಗಳ ಹಿಂದೆ ಓಡುವ ಬಿಸಿಲು ಕುದುರೆಯಂತೆ . ಆತ್ಮದ ತುಮುಲಥೆಯನ್ನು ಕೇಳದೆ ,ಅರಿಯದೆ , ವಿಚಾರಿಸದೆ ಬೇಕಾದದ್ದನ್ನು ಪಡೆದು ಜಯಿಸುತ್ತದೆ .ಅನೇಕ ದೂರಗಳನ್ನು ಕ್ರಮಿಸಿ ಬಂದ ಕವಲು ಹಾದಿಯನ್ನು ನೆನೆದು ಆದ ಅನಾಹುತಕ್ಕಾಗಿ ಮರುಗುತ್ತದೆ . ಆದದ್ದನ್ನೇ ನೆನೆದು ಕೊರಗಿ ತನ್ನನ್ನು ತಾನು ನಾಶ ಪಡಿಸಿಕೊಳ್ಳುವಂತೆ ಮನ ಮಾಡುತ್ತದೆ .ಕಡಿವಾಣವಿಲ್ಲದ ಮನಸ್ಸು ಮಾತು ಕೇಳುವುದೇ ?.ಆಗ ಮನಸ್ಸು ಮಾಡುವುದೇ ಆತ್ಮದ ಕೊಲೆ . ಮಾತು ಕೇಳದ ಮನಸ್ಸಿನ ಪರಮಾವಧಿ ಇದೆ ಅಲ್ಲವೇ ?.
ತಾಳ್ಮೆಯೆಂಬ ಕಡಿವಾಣದಿಂದ ಮಾತು ಕೇಳದ ಮನಸ್ಸನ್ನು ನಿಯಂತ್ರಿಸಬೇಕು.ಆತ್ಮವಿಶ್ವಾಸ ಮತ್ತು ತಾಳ್ಮೆ ಆತ್ಮವನ್ನು ಕೊಲ್ಲಲು ಬಿಡದು.ಒಂಟಿಯಾಗಿ ಬೆಳೆದ ಮನಸ್ಸು ಬಲು ಬೇಗನೆ ದುಡುಕಿ ಕೆಡುಕಿನ ಹಾಧಿ ಹಿಡಿಯುತ್ತದೆ . ಇಂಥಹ ಮನಸ್ಸು ಒತ್ತಡಗಳ , ಸೋಲಿನ ಹೊರೆಯನ್ನು ಸಹಿಸುವುದಿಲ್ಲ . ಸಹಿಸುವ ಮೊದಲೇ ತನ್ನ ನಾಶಕ್ಕಾಗಿ ಹೆಣಗುತ್ತಿರುತ್ತದೆ. ಆಗ ಆಗುವುದೇ ಆತ್ಮದ ಅಂತ್ಯ .
ಮನಸ್ಸು ನಾನಾ ಕಾರಣಗಳಿಂದ ಒಂಟಿತನ ಅನುಭವಿಸುತ್ತದೆ.ಈ ದಿನಗಳಲ್ಲಿ ಬಾಲ್ಯದಿಂದಲೇ ಅನೇಕ ಮಕ್ಕಳು ಒಂಟಿತನ ಅನುಭವಿಸಬೇಕಾಗುತ್ತದೆ. ಆಧುನಿಕತೆಯ ಜೀವನ ಶೈಲಿಯಿಂದ ಅನೇಕ ಕಂದಮ್ಮಗಳು ಪಾಲಕರ ಅಕ್ಕರೆಯ ಪೋಷಣೆಯಿಂದ ವಂಚಿತರಾಗುತ್ತಿದ್ದಾರೆ. ಬೆಳೆಯುವ ಸಿರಿಗೆ ಪ್ರೀತಿಯೆಂಬ ಹಾಲಿನ ,ಮಮತೆ ಎಂಬ ಜೆನೀನ ಆಸರೆಯ ಅಗತ್ಯವಿರುತ್ತದೆ.
Tuesday, August 12, 2008
ಜಾಗತಿಕ ಪಂಜರದೊಳಗೆ
ದೊಡ್ಡ ಆಶಾಗೋಪುರಗಳನ್ನ ಹೊತ್ತು ಹಳ್ಳಿಯಿಂದ ಹಾರಿ ಮಹಾನಗರಿಗೆ ಬರುವ ಅದೆಸ್ಟೋ ಹಕ್ಕಿಗಳು , ತುತ್ತು ಕೂಳಿಗಾಗಿ ಪರದಾಡುವ ಪರಿ ಜಾಗತಿಕ ಮಹಾ ಪಂಜರದೊಳಗಿನ ನಿತ್ಯ ಬವಣೆ .ಕೆಲಸಕ್ಕಾಗಿ ಪರದಾಡುವ ಅನೇಕರು ಈ ಹಳ್ಳಿ ಹಕ್ಕಿಯಂತೆ ಸೂರಿಗಾಗಿ , ಕೂಳಿಗಾಗಿ ಪರದಾಡುತ್ತಿದ್ದರೆ. ಜಾಗತಿಕ ಜೀವನದ ಪಯಣದಲ್ಲಿ ನಗು ಮಾಯವಾಗುತ್ತಿದೆ , ಭಾಂದವ್ಯದ ಬೆಸುಗೆ ಶಿಥಿಳಗೊಲ್ಲುತ್ತಿದೆ , ಮಾತು ಮರೆಯಾಗುತ್ತಿದೆ.ಹಳ್ಳಿಗಳಲ್ಲಿ ಮುಂಜಾವಿನ ಬೆಳಕು ಹಕ್ಕಿಗಳ ಕಲರವಗಳಿಂದ ಸ್ವಾಗತಿಸಲ್ಪಡುವುದು , ಆದರೆ ನಗರವಾಸಿಗಳು ವಾಹನಗಳ ,ಮೊಬೈಲ್ ಫೋನುಗಳ ಕಲರವಗಳೊಂದಿಗೆ ದಿನ ಪ್ರಾರಬಿಸುವಂತಾಗಿದೆ .ವಾಹನಗಳಿಂದ ಉಗುಳುವ ಹೊಗೆ ನಾಲ್ಕು ಕಟ್ಟು ಸಿಗರೇಟು ಸೇವನೆಗಿಂತಲೂ ಹೆಚ್ಚು.ಇಂತಹ ಅನೇಕ ಮಾಯಾ ಕತ್ತಿಗಳು ನಮ್ಮ ಜೀವವನ್ನು ಮಸೆಯುತ್ತಿರುತ್ತದೆ.
ಕತ್ತಿಯ ಅಲಗು ಚೂಪಾದಾಗ ಜೀವವನ್ನೇ ತೆಗೆಯುತ್ತದೆ.ಮಾಯಾ ಪಂಜರದ ಮಸೆಯುವ ಕತ್ತಿಗಳನ್ನು ಕರಗಿಸಲು ಅಸಾದ್ಯ. ದುನಿಯಾದ್ ದರ್ಪಕ್ಕೆ ಧರೆ ದಂಗಾಗುತ್ತಿದೆ.ಹತಾಶೆಯ ಭಾವನೆಗೆ ಮನ ಮುಗ್ಗರಿಸುತ್ತಿದೆ.ಈ ಜಾಗತಿಕ ಜಗ ಸದಾ ಜಂಜಾಟಗಳ ಒತ್ತಡಗಳಿಂದ ಕೂಡಿದ ದೂರದ ಬೆಟ್ಟ ಬಿಸಿಯ ಬೇಗೆಗೆ ಧಗ ಧಗಿಸುತ್ತಿದೆ.
Tuesday, May 27, 2008
ಕಡಲ ತಡಿಯ ಕಲೆಗಳು

ನಮ್ಮೂರು ಗುಜ್ಜಾಡಿ ಕಡಲ ತಡಿಯ ಪುಟ್ಟ ಹಳ್ಳಿ .ಮಲೆನಾಡ ಮೈಸಿರಿಯೊಂದಿಗೆ ಸಮುದ್ರದ ಬೋರ್ಗರೆತದ ನಾದಕ್ಕೆ ಹೆಜ್ಜೆ ಹಾಕುತ್ತ ದಿನ ಪ್ರಾರಂಬಿಸುವ ಮುಗ್ದ ಪ್ರಕೃತಿ ರಮಣೀಯ ತಾಣ .ಪಾಣ ಕುಣಿತ,ಯಕ್ಷಗಾನ ಇಲ್ಲಿನ ಪ್ರಸಿದ್ದ ಕಲೆಗಳು.ಯಕ್ಷಗಾನ ಇತ್ಹೀಚಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ .ಅದನ್ನು ಸರಿಯಾದ ಚೌಕಟ್ಟಿನಲ್ಲಿಉಳಿಸಿ ಬೆಳೆಸಬೇಕಿದೆ .
ಪಾಣ ಕುಣಿತವೆನ್ನುವುದು ತುಂಬಾ ಪುರಾತನ ಕಾಲದಿಂದ ತುಳುನಾಡಿನಲ್ಲಿ ಸಂಪ್ರದಾಯ ಬದ್ದವಾಗಿ ಆಚರಿಸುವ ಪುರಾತನ ಕಲೆ.ಗ್ರಾಮ ದೇವರನ್ನು ಹೊಗಳುತ್ತಾ ,ದಕ್ಕೆಯ ಶಬ್ದಕ್ಕೆ ಕುಣಿಯುತ್ತ ಹೆಜ್ಜೆ ಹಾಕುವ ಪರಿ ಪಾಣ ಕುಣಿತದ ಸಂಪ್ರದಾಯ.ಪಾಣ ವೇಷ ದರಿಸಲು ಅವರದ್ದೇ ಆದ ಪಂಗಡವಿದೆ. ಅವರು ಅನೇಕ ಗ್ರಾಮ್ಯ ದೇವರುಗಳ ವೇಷ ದರಿಸಿ ,ದಕ್ಕೆಯ ಶಬ್ದಕ್ಕೆ ಅನುಸಾರವಾಗಿ ನರ್ತಿಸುತ್ತಾರೆ.ದೈವ ಮನೆಯ ವಾರ್ಷಿಕ ಹಬ್ಬದಂದು ರಾತ್ರಿ ಇದನ್ನು ಆಚರಿಸಲಾಗುವುದು.