Sunday, February 18, 2018

ಆರಾಧನೆ


ಎನಿತು ವರ್ಣಿಸಲಿ ನಿನ್ನ ಪ್ರೀತಿ 
ಹೃದಯಗಳ ಬೆಸೆಯಲು ನೀ ಹೆಣೆದ ರೀತಿ 
ಬಂದನಕೆ  ಕಾರಣ ಪ್ರೇಮ ಕಸೂತಿ 
ಬಣ್ಣ ಬಳಿವ ಆಸೆಗಳಿಗಿಲ್ಲ ಪರಿಮಿತಿ 

ಪ್ರೇಮ ದೀವಿಗೆಯ ಬೆಳಕ ಕಾಂತಿ 
ಜೀವನ ದೇವತೆಗೆ ಮಂತ್ರ ಸ್ತುತಿ 
ಆರಾಧನೆ ಪ್ರೇಮರಾದನೆಗಿಲ್ಲ ಮಿತಿ 
ಬರೆಯುತಿಹನಲ್ಲೆ  ನಿನ್ನ ನೆನೆದೀಕೃತಿ 

ಬಾಳ ಬೆಳಗುತಿರು ದಿವ್ಯ ಜ್ಯೋತಿ 
ಉಸಿರಿಗೆ ಆಸರೆಯಾಗುವೆ ಜೀವಸತಿ 
ಬದುಕ ಭವ್ಯತೆಗೆ ಬಂಗಾರದ ನೀತಿ 
ಅರಿತು ಬಾಳುವ ಎಂದಿಗೂ ನಾವು ಸತಿಪತಿ 

ಪೀತಿಯುಯ್ಯಾಲೆಯಲಿ  ತೂಗುತಿಹುದೆನ್ನ ಮತಿ 
ಹೃದಯ ಗೀತೆಯ ಹಾಡು ಗೆಳತಿ 
ಕೇಳುತ ಪವಡಿಸುವೆ ನಿನ್ನುಸಿರೇ-ಶ್ರುತಿ 
ಆರಾಧನೆ ಪ್ರೇಮರಾದನೆಯೇ ಪ್ರೀತಿ 

                                       ----ಮಂಜುನಾಥ್ ಗುಜ್ಜಾಡಿ 

Thursday, October 16, 2014

ಮುರುಡೇಶ್ವರದ ಯಕ್ಷ ರಕ್ಷೆಯ ಹರಿಕಾರರಿಗೊಂದು ನಮನ

ಡಾ. ಐಯ್. ಆರ್ ಭಟ್ ರವರನ್ನು ನಾನು ಪ್ರಥಮವಾಗಿ ಭೇಟಿಯಾದದ್ದು ಜನವರಿ ೨೧ ೨೦೧೩ ರಂದು ಮುರುಡೇಶ್ವರ ಜಾತ್ರೆಯ ಯಕ್ಷ ರಕ್ಷೆಯ ಚಿತ್ರಾಕ್ಷಿ ಕಲ್ಯಾಣವೆಂಬ ಯಕ್ಷಗಾನ ಕಾರ್ಯಕ್ರಮಕ್ಕೆ ಅತಿಥಿ ಕಲಾವಿದನಾಗಿ ಬಂದಾಗ . ಈ ಸೌಭಾಗ್ಯವನ್ನು ನನಗೆ ನೀಡಿದವರು ಯಕ್ಷ ರಕ್ಷೆಯ ಕಾರ್ಯದರ್ಶಿಯಗಿರುವ ಗಣಪತಿ ಕಾಯ್ಕಿಣಿಯವರು.ಯಕ್ಷರಕ್ಷೆಯ ಮನೆಯೊಳಗೆ ಬಂದಾಗ ಇಲ್ಲಿಯ ಸುಂದರ ವ್ಯವಸ್ಥೆ ,ರಂಗಸ್ತಳ, ಚೌಕಿ ಮನೆ ,ಸಾಹಿತ್ಯ ಪುಸ್ತಕಗಳ ಭಂಡಾರ ,ಚೌಕಿ ಮನೆಯ ಮಾಡಿಗೆ ನೇತು ಹಾಕಿದ ಕಲಾವಿದರ ಚಿತ್ರಪಟ ,ಶ್ರುತಿ ಪೆಟ್ಟಿಗೆ,ಮದ್ದಳೆ ,ಚಂಡೆ,ತಾಳ ,ಒಡ್ಡೋಲಗದ ನೀಲಿ ಬಣ್ಣದ ಪರದೆಗಳನ್ನೆಲ್ಲ ಕಂಡಾಗ ಈ ಪರಿಯಲ್ಲಿ ಕಟ್ಟಿ ಬೆಳೆಸಿದ ಪುಟ್ಟ ಯಕ್ಷಕಾಶಿಯ ಯಶಸ್ವಿ ಹರಿಕಾರ ಡಾ. ಐಯ್. ಆರ್ ಭಟ್ ರವರು ಎಂದಾಗ ಯಕ್ಷ ಮಾತೆಯ ಆರಾಧಕನದ ನನಗೆ ಹೃದಯ ತುಂಬಿ ಬಂತು, ಅವರ ಸಾದನೆಗೆ ಮನದಲ್ಲೇ ನೆನೆದೆ. ಅಲ್ಲಿಂದ ಇಲ್ಲಿಯವರೆಗೆ ಅವರು ಆಯೋಜಿಸಿದ ಅದೆಷ್ಟೋ ಕಾರ್ಯಕ್ರಮಗಳಲ್ಲಿ ನಾನು ಕಂಡದ್ದು ಅವರ ಉತ್ಸಾಹದ ಚಿಲುಮೆ , ಸ್ಪೂರ್ತಿ , ಧನಾತ್ಮಕ ಚಿಂತನೆ ,ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಕಲಾ ಪೋಷಕ ಗುಣ.

ಅವರು ಅದೆಷ್ಟು ಯಕ್ಷಗಾನವನ್ನು ಪ್ರೀತಿಸುತ್ತಿದ್ದರೆಂದರೆ ಅವರ ಚರದೂರವಾಣಿಯ ರಿಂಗಣ ಯಕ್ಷಗಾನ ಪದವಾಗಿತ್ತು , ಭಟ್ಟರು ಬೆಳಗ್ಗೆ ಎದ್ದು ಮೊದಲು ಬರುವುದು ಯಕ್ಷ ರಕ್ಷೆಗೆ. ಅಲ್ಲಿ ಹಾಡುತ್ತಿದ್ದ ಮದುರ ಕೋಗಿಲೆ ದಿ. ಕೊಪ್ಪದಮಕ್ಕಿ ಈರಪ್ಪ ಭಾಗವತರು ತಾಳ ಹಿಡಿದು ಹಾಡಿದರೆ ಸಾಕು ನಮ್ಮ ಭಟ್ಟರು ಮದ್ದಳೆ ಹಿಡಿದು ಲಯಬದ್ದವಾಗಿ ಭಾರಿಸುತ್ತಿದ್ದರೆ ಯಕ್ಷ ಲೋಕವೇ ಸೃಷ್ಟಿಯಾಗುತ್ತಿತ್ತು. ರಾತ್ರಿಯ ಯಕ್ಷ ರಕ್ಷೆಯ ಆಟ ಮುಗಿಸಿ ಅಲ್ಲಿಯೇ ಮಲಗಿ ಬೆಳೆಗ್ಗೆ ಎದ್ದಾಗ ಕಂಡ ಈ ಪುಟ್ಟ ಲೋಕ ಮರೆಯಲಸದಳ . ಯಕ್ಷ ರಕ್ಷೆಯನ್ನು ತನ್ನ ಮನೆಯ ಪಕ್ಕದಲ್ಲೇ ಕಟ್ಟಿ ಬೆಳೆಸಿ , ರಕ್ಷಣಾ ಕವಚದಂತಿರುವ ನಮ್ಮ ಭಟ್ಟರು ವೈದ್ಯರಾಗಿಯು ತನ್ನ ಕೈ ಗುಣ ಆರೈಕೆಯಿಂದ ಜನ ಮನ ಗೆದ್ದವರು. ನಮ್ಮ ಕಾಯಿಲೆ ಗುಣವಾಗಲು ಮನೋ ಸ್ಥೈರ್ಯ ಮುಖ್ಯ ಎನ್ನುತ್ತಿದ್ದರು ,ವೈದ್ಯರಾಗಿಯೂ , ಯಕ್ಷ ರಕ್ಷಕರಾಗಿಯೂ ಅವರು ಮಾಡಿದ ಸಮಾಜ ಮುಖಿ ಕೆಲಸ ಶ್ಲಾಘನೀಯ . ಯಕ್ಷ ಸ್ವರ ತಾಳದೊಂದಿಗೆ ಭವ್ಯ ಬದುಕಿನ ಲಯ ಕಂಡುಕೊಂಡ ಯಕ್ಷ ರಕ್ಷೆಯ ಸಾರಥಿ ಭಟ್ಟರ ಹಳೆಬೇರ ಹೊಸ ಚಿಗುರ ಆವಿಷ್ಕಾರ , ಬೆಳೆವ ಯಕ್ಷ ಸಾಮ್ರಾಜ್ಯಕ್ಕೆ ಭದ್ರ ಬುನಾದಿಯಗಲಿ,ಹೊಳೆವ ಯಕ್ಷ ಭ್ಯಾಗಡೆಗೆ ಮತ್ತಷ್ಟು ಹೊಳಪು ಕೊಟ್ಟು ಧರಿಸಿದ ಕಲಾವಿದರ ವೇಷಕ್ಕೆ ಮೆರುಗು ಕೊಡಲಿ,ಯಕ್ಷ ರಕ್ಷೆಯ ಮನೆಗೆ ಬೆಳಕು ಕೊಟ್ಟ ಅಯ್ಯರೆಂಬ ದಿವ್ಯ ದೀವಿಗೆ ಸದಾ ಉರಿಯುತಿರಲಿ , ಬೆಳಗುತಿರಲಿ ನಿರಂತರ.

ಬೆಳಗು ನಿರಂತರ ಯಕ್ಷರಕ್ಷೆಯೆಂಬ ದೀಪ
ಆರದಂತೆ ಕಾಯುತಿಹುದು ಅಯ್ಯರೆಂಬ ರೂಪ
ಧೀಂಕಿಟಕೆ ಕುಣಿವರೆಲ್ಲ ಈಬೆಳಕ ಪ್ರತಾಪ
ಯಕ್ಷಗಾನ ರಕ್ಷಕನೀ ಸಾದನೆ ಬಲು ಅಪರೂಪ.

ಯಕ್ಷ ರಕ್ಷೆಯ ಹರಿಕಾರನಿಗೊಂದು ನುಡಿ ನಮನ ,ಇಂತಿ ನಿಮ್ಮ ಕಲಾವಿದ ,
ಮಂಜುನಾಥ್ ಬಿಲ್ಲವ ಗುಜ್ಜಾಡಿ.

Friday, November 29, 2013

ಮನಸ್ಥಿತಿ

ಮನಸೇ ನಿನಗ್ಯಾಕೆ  ಇಂಥಾ ಮನಸ್ಥಿತಿ ,
ಮನಸು ಮನಸನೆ ಅರಿಯದ ನಿನ್ನಿಸ್ಥಿತಿ ,
ಅರುಹದೆ ನುಡಿವೆ ಇಲ್ಲದೆ ಇತಿಮಿತಿ ,
ಸತ್ಯವನರಿಯುತ ಉಸುರು ಇರಲಿ ಮತಿ .

ಗಾಳಿಯ ಮಾತಿಗೆ ಲಾಗವ ಹಾಕದಿರು ,
ಅರಿಯದೆ ಅನ್ಯ ಮನಸನು ದೂರದಿರು,
ಕುರುಡು ಪ್ರೀತಿಯ ಹೊದ್ದು ಮಲಗದಿರು,
ಅನ್ಯರ ಕಷ್ಟವ ನೀ ಅರಿಯುತಿರು.

ಸಹಾಯವೆಂಬ ಜೀವ ಸದಾ ನಿನ್ನೊಲಿರಲಿ,
ಸ್ನೇಹವೆಂಬ ಅಮೂಲ್ಯ ಮುತ್ತು ಒಡೆಯದಿರಲಿ ,
ಅರಿತು ನುಡಿವ ಮಾತು ಹಿತವಾಗಿರಲಿ,
ನೋವ ಕೊಡುವ ಬುದ್ದಿ ದೂರವಿರಲಿ.

ಜೀವ ಕೊಡುವ ಮನಸನು ಕಾಪಾಡು ,
ಜೀವನವನೆ ನುಂಗುವ ಕುಹಕಿಯ ಬಿಸಾಡ್ಹು ,
ಮನಸೇ ನೀ ಮನಸಲಿ ವೂಲುಮೆಯಿಡು ,
ಮಾತಿನಲಿ ನೋಯಿಸುವ ಗುಣ ಬಿಡುಬಿಡು.

Friday, May 17, 2013

ಸ್ನೇಹದ ನೋವು ನಲಿವು

ಕೇಳಿದೆನು ಇಂಪಿನ ಸ್ವರವ ಮುನ್ನ
ಓಕೋಗಿಲೆಯೇ ಹೇಗೆ ಮರೆಯಲಿ ನಿನ್ನ 
ಮತ್ತೆ ನಿನ್ನ ಗೆಳೆತನದ ನೆನಪನ್ನ
ಮರೆಯಲಾಗದು ನನ್ನ ಮುದ್ದು  ಚಿನ್ನ

ನಿಗೂಡ ನಿನ್ನ ಹುಟ್ಟು ಕಥೆ
ತಾಯಿಯಾರ್ರೋ ಆದರೂ ನಿನಗಿಲ್ಲ ವ್ಯಥೆ
ಎಂದೆಂದು ಹೊಳೆಯುವುದು ಸ್ವರವೆಂಬ ಸ್ವರ್ಣಲತೆ
ನಾಕಾಗೆಯಾದರು ಒಡನಾಟವು ಮರೆಯಾಯ್ತೆ 

ಓಕೋಗಿಲೆ ಸ್ವರದ ಅಹಂಕಾರ ನಿನಗಿಲ್ಲ
ಕಾಗೆಯೆಂದು ನೀ ಎನ್ನ ಕಂಡಿಲ್ಲ
ಬೆಳೆಯ ಬೆಳೆಯುತ್ತ ದಯಾದಿಗಲು ನಾವಗಿಲ್ಲ
ಅಗಲುವಿಕೆಯೆಂಬ ಸಂಕಟ ಕೊನೆಗೂ ಬಿಡಲಿಲ್ಲ

ಮನದಲ್ಲಿ ಉಳಿದಿಹುದು ಅನೇಕ ವಿಷ್ಯ
ಹೇಳಲಾರೆ ಕೋಗಿಲೆ  ಕಹಿ ಸತ್ಯ
ಸಿಹಿ ಸುಳ್ಳು ಭಾದಿಸದು ಕೇಳಯ್ಯ
ನಗುನಗುತ ಬಾಳು ಎಂದೆಂದು ನೀನಯ್ಯ

Monday, May 13, 2013

ಸ್ನೇಹದ ಮೌಲ್ಯ


 ಓಗೆಳೆಯ ಅಗಲಿ ಹೋಗುವುದು ಅನಿವಾರ್ಯ
ಮರೆಯಬೇಡ ಸ್ನೇಹದಿ ಗೈದ ಕಾರ್ಯ
ಉದ್ಯೊಗಪರ್ವದಿ ಮೆರೆಯಲಿ ನಿನ್ನ ಶೌರ್ಯ
ಎಲ್ಲ ಪಡೆಯಲಿ - ಅರಿಯಲಿ ನಿನ್ನ ಮೌಲ್ಯ .

ಪ್ರೀತಿ ತುಂಬಿದ ಮನದಲಿ ಹರಸುವೆನು
ಯಶಸ್ಸು ನಿನ್ನದಾಗಲಿ ಎಂದು ಬೇಡುವೆನು
ಅಗಲಿಕೆ  ತರುತಿಹುದು  ಕಣ್ಣೀರ ಹನಿಯನು
ನಿನ್ನ ಉತ್ತಮ ಭವಿಷ್ಯಕ್ಕಾಗಿ ಸಹಿಸಿಹೆನು

ಸುಖ- ದುಃ ಖಗಳೆರಡು  ಬದುಕ ಹಾದಿಯಲಿ
ಗೆದ್ದು ಬಾ ಬದುಕೆಂಬ ಯುದ್ದದಲಿ
ಏರಲಿ ಕೀರ್ತಿ ಪತಾಕೆ ಹಾರಲಿ
ಕಾಯುತಿರುವೆನು ಎಂದೆಂದೂ ನೀಬರುವ ಹಾದಿಯಲಿ




Thursday, May 9, 2013

ಅರಿಯೋ ಎನ್ನ ಮನ

ಪ್ರೀತಿಯ ಗೆಳೆತನದ ಬಂದದ ಬೆಸುಗೆ
ನುಡಿಯೆoಬ ರಕ್ತ ಸ್ನೇಹದ ನರದೊಳಗೆ
ಸಂಚಲನವಾಗಬೇಕು ಗೆಳೆಯರಿಬ್ಬರೊಳಗೆ
ಹರಿಸುವವರ್ ಯಾರು ಹೇಗೆ ಆಬಗೆ

ಸ್ನೇಹವು ಹತ್ತಿರವಿದ್ದಾಗ ಸಂತಸದ ನಗೆ
ದ್ವೇಷವು ದೂರವಾದರೆ ಸ್ನೇಹಕ್ಕೆ ಬೆಲೆ
ನಗುವು ಕೊಡುವುದು ಜೀವನಕ್ಕೆ ಕಳೆ
ಒಂದಾಗುವುದೇ ಸ್ನೇಹ ಸ್ಪೂರ್ತಿಯ ಸೆಲೆ

ಹೃದಯದ ನೋವ ತಿಳಿವುದು ಸ್ನೇಹ
ಬಿಡು ಬಿಡು ದುರಲೋಚನೆಗಳ ಮೋಹ
ಕೊಡು ಕೊಡು ಸ್ನೇಹ ಹಸ್ಥವ ಗೆಳೆಯ
ನಿಷ್ಕಲ್ಮಶವಯ್ಯೆ ಅರಿಯೋ ಎನ್ನ ಮನ


Thursday, February 11, 2010

ಪ್ರೀತಿಯ ಮುಸುಕು

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮಂಜು ಕವಿದ ಪ್ರೀತಿಯ ಪ್ರಕೃತಿ
ಭಾವನೆಗಳ ಬಿಚ್ಚಿಡುವ ಪ್ರಣಯದ ರೀತಿ
ಪ್ರೇಯಸೀ ನೀ ಎಲೆಯ ಮೇಲೀನ ಹನಿ
ಬದುಕಲಾರೆನು ಕೈಜಾರಿದರೆ ಬಾ ರಮಣಿ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಹಾರುತ ಬರುತಿರೆ ನಿನ್ನಯ ಬಳಿಗೆ
ಸಿಲುಕಿಹೇ ನಿನ್ನಯ ಪ್ರೀತಿಯ ಸುಳಿಗೆ
ಬರಬಾರದೆ ಕೈ ಹಿಡಿದು ಸನಿಹಕೆ
ಪ್ರೀತಿಯ ತೇರನು ನೋಡುವ ಅನಿಸಿಕೆ.

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

ಮೊದಲ ಮಳೆಗೆ ಹಸಿಯಾದ ಭೂಮಿ
ಮಲ್ಲಿಗೆಯಾಗಿ ಮಾಮರವ ತಬ್ಬಿಬಾ ಪ್ರೇಮಿ
ಅರಳಿ ಚೆಲ್ಲಬಾರದೆ ನಗೆಯ ಚೆಲುವೆ
ಈಗಲಾದರೂ ಮುಸುಕ ತೆಗೆ ತಬ್ಬಿದ ಹೂವೇ .

ಪ್ರೇಮ ದುಂಭಿಯನೊಮ್ಮೆ ನೋಡೇ
ಮುಸುಕ ತೆಗೆಯೇ ಮಮತೆಯ ಹೂವೇ .

Wednesday, February 3, 2010

ಮನವು ಮರುಭೂಮಿ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ

ಮನದ ಮುರುಭೂಮಿ ತುಂಬೆಲ್ಲ ನಿರಾಸೆಯ ಧೂಳು
ಭಾರವೆನಿಸಿದೆ ಭಾಳು ಬರಿ ಗೋಳು
ಹೇಗೆ ತಿಳಿಸಲಿ ನಿನಗೆ ಪ್ರೀತಿಯ ಹೂವೇ
ಬರಬೇಡ ಈ ಮರುಭೂಮಿಗೆ ಸುಡುವೆ ನೀನೇ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ

ನಿನ್ನ ಸ್ನೇಹದ ನೆನಪಿನ ಇಬ್ಬನಿ
ಮಿಲನವಾಗುತ ಪ್ರೀತಿಯ ಹನಿ ಹನಿ
ಸೇರಭಾರದೆ ಕಾರ್ಮೋಡದ ಖನಿ
ತೇಲುತಿಹೆ ಸ್ನೇಹ ಮಳೆಯ ಸುರಿಸದೆ ಸುಮ್ಮನಿ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ


ಹಪ ಹಪಿಸುತಿದೆ ಮನವು ಪ್ರೀತಿಯ ಹನಿಗೆ
ಬೆಳಕ ತರಬಾರದೆ ಮಿಂಚಿ ಪ್ರೇಮ ಮಂದಿರದೊಳಗೆ
ಕತ್ತ್ತಲಾಗಿದೆ ಬದುಕು ನೀನಿಲ್ಲದೆ ನನಗೆ
ಹುಡುಕುತಿರುವೇ ಪ್ರೀತಿಯ ನೆರಳ ನೀ ಬರುವವರೆಗೆ

ತಿಳಿದು ತಿಳಿದು ಮನವಾಯ್ತು ಮುರುಭೂಮಿ
ಪ್ರೀತಿ ಹಸಿರ ಹುಡುಕುತಿಹನು ಈ ಪ್ರೇಮಿ

Wednesday, December 23, 2009

ಬರಡು ಜಗದ ಬದುಕು

ಹೇಗಾಯಿತು ಮನುಜನ ಬದುಕು ಬರಡು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.

ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.

ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.



Monday, December 21, 2009

ಬಾಡಿ ಹೋದ ಬಳ್ಳಿ

ಸಂತೋಷವೆಂಬ ಸ್ನೇಹ ಬಳ್ಳಿ
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .

ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .

ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.



Monday, October 12, 2009

ಓ ಗೆಳತಿಯೇ!

ಓ ನಲ್ಮೆಯ ಗೆಳತಿಯೇ
ನಿನಗೆ ಪ್ರತಿ ದಿನವು ಶುಭ ಕೋರುವೆ
ವರುಷವು ಹರುಷವ ಹೊತ್ತು ಬರಲಿ ಬಾಳಲಿ
ಸದಾ ಜಯದ ಜ್ಯೋತಿಯು ಬೆಳಗಲಿ .

ಸದಾ ಏರುಥಿರು ಯಶಸ್ಸಿನ ತೇರನು
ಭದ್ರಗೊಳಿಸು ಸ್ನೇಹ ಭಾಂದವ್ಯದ ಬೇರನು
ಅನರ್ಥದೆಡೆಗೆ ಬದುಕ ಭಾಗಲು ಬಿಡದಿರು
ನಗುವ ಸಾಗರದಿ ತೇಲುತಿರು.

ಸ್ನೇಹದ ಬಂಗಾರ ಹೊಳೆಯುತಿರಲಿ
ಆ ಅಮೋಘ ಹೊಳಪು ಮಾಸದಿರಲಿ
ಪ್ರೀತಿಯ ಬುಗ್ಗೆ ಚಿಮ್ಮುತಿರಲಿ
ಅದರಿಂದ ಬದುಕ ಬಯಲು ಹಸಿರಾಗಲಿ .

Monday, September 7, 2009

ಸ್ನೇಹ ಜ್ಯೋತಿ

ಪ್ರಜ್ವಲಿಸುವ ಜ್ಯೋತಿಯು
ಸ್ನೇಹವೆಂಬ ಎಣ್ಣೆಯನ್ನು
ಹತ್ತಿಯಿಂದ ಹೀರಿ ತೆಗೆದು
ಭಾಂದವ್ಯದಿ ಉರಿಯುತಿದೆ
ಬೆಳಕನೀವ ಜ್ಯೋತಿಯು .

ಗೆಳತಿಯೆಂಬ ಜ್ಯೋತಿಯು
ತನ್ನ ಸುತ್ತ ನೆರಳನಿಟ್ಟು
ಸ್ನೇಹ ಜಗಕೆ ಬೆಳಕ ಕೊಟ್ಟು
ಉತ್ಸಾಹದಿ ಉರಿಯುತಿದೆ
ಸರಿ ಧಾರಿತೋರ್ವ ಜ್ಯೋತಿಯು.

ಶುಬ್ರವಾದ ಜ್ಯೋತಿಯು
ಕರುಣ ಶಕ್ತಿ ಬೆಳಕ ಬೀರಿ
ಮೂಢ ಭಾವ ಭಯವ ತೂರಿ
ಶಾಂತವಾಗಿ ಉರಿಯುತಿದೆ
ಸ್ನೇಹವೆಂಬ ಜ್ಯೋತಿಯು.



Tuesday, August 25, 2009

ಸಂಜೆ ಮತ್ತಿನೊಳು ಕೂಸು ಬಡವಾಯ್ತು

ಅದೊಂದುಸಂಜೆ ಮಬ್ಬುಗತ್ತಲು ಭುವಿತುಂಬ ಮುಸುಕಿತ್ತು.ಅದಾಗಲೇ ಬೆಂಗಳೂರು ನೃತ್ಯ ಬೆಡಗಿಯಂತೆ ಮತ್ತೇರಿಸಲು ಸಿದ್ದಗೊಡಿತ್ತು . ಈ ಸಂಜೆಯೇ ಹಾಗೆ , ಅನೇಕ ಘಟನೆಗಳು ಸಿಡಿ ಮದ್ದುಗಳಂತೆ ಸಿಡಿದು ಮಲಿನ ಹೊಗೆಯನ್ನು ಪಸರಿಸಿ ಮಾಯವಾಗುತ್ತದೆ. ಪಾನಮತ್ತರಿಗೆ ಸಂಜೆಯೇ ವೇಧಿಕೆಯಲ್ಲವೇ ? ಅದೊಂದು ಸಂಜೆಯ ಘಟನೆ ಹೃದಯ ವಿಧ್ರಾವಕವಾಗಿತ್ತು .ಪ್ರಪಂಚವೇ ಅರಿಯದ ಹೆಣ್ಣು ಮಗು ಕಾಲುದಾರಿಯಲ್ಲಿ ಕುಳಿತಿತ್ತು . ಈ ಜಗದ ಆಗು ಹೋಗುಗಳನ್ನೇ ಅರಿಯದ ಮುಗ್ಧ ಜೀವ ಅದು. ತನ್ನ ಭಾವನೆಗಳನ್ನ ನಗು ಅಳುವಿನಿಂದ ಹೊರತು ಬೇರಾವುದೇ ಮಾತಿನಿಂದ ಹೇಳಲಾಗದ ಪುಟ್ಟ ಕಂದಮ್ಮ.ಅಂಗಡಿಯ ಕೆಲಸದಲಿ ತರಾತುರಿಯಲ್ಲಿದ್ದ ನಾನು ಮತ್ತೆ ಆ ಕೂಸಿನೆಡೆಗೆ ಗಮನ ಕೊಡಲಾಗಲಿಲ್ಲ .

ಅದಾಗಲೇ ನಮ್ಮ ಬೆಂಗಳೂರು ಕತ್ತಲೆಯ ಸೆರಗಿನೊಳಗೆ ಜಾರಿತ್ತು .ನಮ್ಮ ಅಂಗಡಿಗೆಯ ಗಿರಾಕಿ ಒಬ್ಬರು ಮಗುವೊಂದನ್ನು ಎತ್ತಿ ತಿಂಡಿಗಳನ್ನು ಕೊಟ್ಟರು .ಅದಾಗಲೇ ಕಂಡ ಮಗುವಿನ ನೆನಪು ಮನದೊಳಗೆ ಮತ್ತೆ ಮರಳಿತ್ತು.ಆ ಗಿರಾಕಿ ಮಾನವೀಯತೆಯ ಮಮಕಾರದಿಂದ ಮಗುವಿನ ಹೆತ್ತವರನ್ನು ಅತ್ತಿತ್ತ ಹುಡುಕಲು ಆರಂಭಿಸಿದರು.ಆಗಲೇ ತಿಳಿದಿದ್ದು ಆ ಮಗುವಿನ ತಾಯಿ ಪಾನಾಮತ್ತಲಾಗಿ ಚರಂಡಿಯಲ್ಲಿ ಬಿದ್ದಿದ್ದಳು . ಆಕೆ ಅವಿದ್ಯಾವಂತ ಮಹಿಳೆ ಆದರು ಭಾರತೀಯ ನಾರಿಯ ಆ ಸದ್ಗುಣ ಮಾಯವಾಗಿ ತನ್ನ ಕಂದಮ್ಮನನ್ನು ಯೋಚಿಸದೆ ಮಾಡಿದ ದುರ್ಭುದ್ದಿಯನ್ನು ಯಾರಿಗೆ ಹೇಳಲಿ ? .

ಅತ್ತ ಮುಗ್ದ ಮಗು ಇತ್ತ ಏನ ಹೇಳಿದರು ಅರ್ಥವಾಗದ ತಾಯಿಯ ಸ್ಥಿತಿ , ಅದೊಂದು ಸಂದಿಘ್ದದದ ಪರಿಸ್ಥಿತಿ ನಮ್ಮ ಗಿರಾಕಿಯದ್ದು .ಆಮೇಲೆ ಅವರು ಆಕೆಯ ತಲೆಯ ಮೇಲೆ ನೀರನು ಹೊಯ್ದು ಸ್ವಲ್ಪ ಹೊತ್ತಿನ ನಂತರ ಆಕೆಗೆ ಪ್ರಪಂಚದ ಅರಿವಯಿಥೆನೋ ? ಎನನ್ನು ಹೇಳದೆ ಮಗುವನ್ನು ಎತ್ತಿಕೊಂಡು ಲಘುಬಗೆಯಿಂದ ಹೊರಟಳು.....! .ಅಲ್ಲೇ ಮುಂದೆ ಹೋಗುತ್ತ ವ್ಯಕ್ತಿಯೋರ್ವನನ್ನು ಆಕೆ ಎತ್ತುತ್ತಿದ್ದಳು ಆಗಲೇ ತಿಳಿದಿದ್ದು ಆಕೆಯ ಗಂಡನೂ ಕುಡಿದು ಬಿದ್ದಿದ್ದ ಎಂದು.ಈ ಪನಮತ್ತಿನ ದಂಪತಿಗಳ ನಡುವೆ ಪಾಪ ಏನೂ ಅರಿಯದ ಕೂಸು ಬಡವಾಯ್ತು .

Thursday, May 28, 2009

ಮಾತು ಕೇಳದ ಮನಸ್ಸು


ಮನಸ್ಸೇ ಹಾಗೆ ಆಸೆಗಳ ಆಶಾಕಿರಣಗಳ ಹಿಂದೆ ಓಡುವ ಬಿಸಿಲು ಕುದುರೆಯಂತೆ . ಆತ್ಮದ ತುಮುಲಥೆಯನ್ನು ಕೇಳದೆ ,ಅರಿಯದೆ , ವಿಚಾರಿಸದೆ ಬೇಕಾದದ್ದನ್ನು ಪಡೆದು ಜಯಿಸುತ್ತದೆ .ಅನೇಕ ದೂರಗಳನ್ನು ಕ್ರಮಿಸಿ ಬಂದ ಕವಲು ಹಾದಿಯನ್ನು ನೆನೆದು ಆದ ಅನಾಹುತಕ್ಕಾಗಿ ಮರುಗುತ್ತದೆ . ಆದದ್ದನ್ನೇ ನೆನೆದು ಕೊರಗಿ ತನ್ನನ್ನು ತಾನು ನಾಶ ಪಡಿಸಿಕೊಳ್ಳುವಂತೆ ಮನ ಮಾಡುತ್ತದೆ .ಕಡಿವಾಣವಿಲ್ಲದ ಮನಸ್ಸು ಮಾತು ಕೇಳುವುದೇ ?.ಆಗ ಮನಸ್ಸು ಮಾಡುವುದೇ ಆತ್ಮದ ಕೊಲೆ . ಮಾತು ಕೇಳದ ಮನಸ್ಸಿನ ಪರಮಾವಧಿ ಇದೆ ಅಲ್ಲವೇ ?.



ತಾಳ್ಮೆಯೆಂಬ ಕಡಿವಾಣದಿಂದ ಮಾತು ಕೇಳದ ಮನಸ್ಸನ್ನು ನಿಯಂತ್ರಿಸಬೇಕು.ಆತ್ಮವಿಶ್ವಾಸ ಮತ್ತು ತಾಳ್ಮೆ ಆತ್ಮವನ್ನು ಕೊಲ್ಲಲು ಬಿಡದು.ಒಂಟಿಯಾಗಿ ಬೆಳೆದ ಮನಸ್ಸು ಬಲು ಬೇಗನೆ ದುಡುಕಿ ಕೆಡುಕಿನ ಹಾಧಿ ಹಿಡಿಯುತ್ತದೆ . ಇಂಥಹ ಮನಸ್ಸು ಒತ್ತಡಗಳ , ಸೋಲಿನ ಹೊರೆಯನ್ನು ಸಹಿಸುವುದಿಲ್ಲ . ಸಹಿಸುವ ಮೊದಲೇ ತನ್ನ ನಾಶಕ್ಕಾಗಿ ಹೆಣಗುತ್ತಿರುತ್ತದೆ. ಆಗ ಆಗುವುದೇ ಆತ್ಮದ ಅಂತ್ಯ .

ಮನಸ್ಸು ನಾನಾ ಕಾರಣಗಳಿಂದ ಒಂಟಿತನ ಅನುಭವಿಸುತ್ತದೆ.ಈ ದಿನಗಳಲ್ಲಿ ಬಾಲ್ಯದಿಂದಲೇ ಅನೇಕ ಮಕ್ಕಳು ಒಂಟಿತನ ಅನುಭವಿಸಬೇಕಾಗುತ್ತದೆ. ಆಧುನಿಕತೆಯ ಜೀವನ ಶೈಲಿಯಿಂದ ಅನೇಕ ಕಂದಮ್ಮಗಳು ಪಾಲಕರ ಅಕ್ಕರೆಯ ಪೋಷಣೆಯಿಂದ ವಂಚಿತರಾಗುತ್ತಿದ್ದಾರೆ. ಬೆಳೆಯುವ ಸಿರಿಗೆ ಪ್ರೀತಿಯೆಂಬ ಹಾಲಿನ ,ಮಮತೆ ಎಂಬ ಜೆನೀನ ಆಸರೆಯ ಅಗತ್ಯವಿರುತ್ತದೆ.

Tuesday, August 12, 2008

ಜಾಗತಿಕ ಪಂಜರದೊಳಗೆ

ಆ ದಿನಗಳು , ಬಾಲ್ಯದ ಸುಂದರ ನೆನಪುಗಳು ಮನಸ್ಸಿನ ಆಕಾಶದೊಳಗೆ ಬರುವ ಪುಟ್ಟ ಪುಟ್ಟ ಮೋಡೆಗಳಂತೆ . ಜಾಗತಿಕ ಬೇಗೆಯಲ್ಲಿ ಬೆಂದ ಮನಕ್ಕೊಮ್ಮೆ ತುಂತುರು ಹನಿಯನ್ನು ಸ್ಪರ್ಶಿಸಿ ಹಾರಿ ಹೋಗುತ್ತವೆ . ನಾಲ್ಕು ಗೋಡೆಯ ಜಾಗತಿಕ ಪಂಜರದೊಳಗಿರುವ ನನಗೀಗ ಅವೆಲ್ಲ ಬಾಲ್ಯವೆಂಬ ಬೂಥಕಾಲದ ಬತ್ತಳಿಕೆಯ ಬಾಣಗಳು. ಜಾಗತಿಕ ಬೇಗೆಯಲ್ಲಿ ಬೆಂದ ಮನಸ್ಸಿಂದು ಪಂಜರದ ಗಿಳಿಯಂತಾಗಿದೆ. ದೊಡ್ಡ ಆಶಾಗೋಪುರಗಳನ್ನ ಹೊತ್ತು ಹಳ್ಳಿಯಿಂದ ಹಾರಿ ಮಹಾನಗರಿಗೆ ಬರುವ ಅದೆಸ್ಟೋ ಹಕ್ಕಿಗಳು , ತುತ್ತು ಕೂಳಿಗಾಗಿ ಪರದಾಡುವ ಪರಿ ಜಾಗತಿಕ ಮಹಾ ಪಂಜರದೊಳಗಿನ ನಿತ್ಯ ಬವಣೆ .ಕೆಲಸಕ್ಕಾಗಿ ಪರದಾಡುವ ಅನೇಕರು ಈ ಹಳ್ಳಿ ಹಕ್ಕಿಯಂತೆ ಸೂರಿಗಾಗಿ , ಕೂಳಿಗಾಗಿ ಪರದಾಡುತ್ತಿದ್ದರೆ. ಜಾಗತಿಕ ಜೀವನದ ಪಯಣದಲ್ಲಿ ನಗು ಮಾಯವಾಗುತ್ತಿದೆ , ಭಾಂದವ್ಯದ ಬೆಸುಗೆ ಶಿಥಿಳಗೊಲ್ಲುತ್ತಿದೆ , ಮಾತು ಮರೆಯಾಗುತ್ತಿದೆ.

ಹಳ್ಳಿಗಳಲ್ಲಿ ಮುಂಜಾವಿನ ಬೆಳಕು ಹಕ್ಕಿಗಳ ಕಲರವಗಳಿಂದ ಸ್ವಾಗತಿಸಲ್ಪಡುವುದು , ಆದರೆ ನಗರವಾಸಿಗಳು ವಾಹನಗಳ ,ಮೊಬೈಲ್ ಫೋನುಗಳ ಕಲರವಗಳೊಂದಿಗೆ ದಿನ ಪ್ರಾರಬಿಸುವಂತಾಗಿದೆ .ವಾಹನಗಳಿಂದ ಉಗುಳುವ ಹೊಗೆ ನಾಲ್ಕು ಕಟ್ಟು ಸಿಗರೇಟು ಸೇವನೆಗಿಂತಲೂ ಹೆಚ್ಚು.ಇಂತಹ ಅನೇಕ ಮಾಯಾ ಕತ್ತಿಗಳು ನಮ್ಮ ಜೀವವನ್ನು ಮಸೆಯುತ್ತಿರುತ್ತದೆ.
ಕತ್ತಿಯ ಅಲಗು ಚೂಪಾದಾಗ ಜೀವವನ್ನೇ ತೆಗೆಯುತ್ತದೆ.ಮಾಯಾ ಪಂಜರದ ಮಸೆಯುವ ಕತ್ತಿಗಳನ್ನು ಕರಗಿಸಲು ಅಸಾದ್ಯ. ದುನಿಯಾದ್ ದರ್ಪಕ್ಕೆ ಧರೆ ದಂಗಾಗುತ್ತಿದೆ.ಹತಾಶೆಯ ಭಾವನೆಗೆ ಮನ ಮುಗ್ಗರಿಸುತ್ತಿದೆ.ಈ ಜಾಗತಿಕ ಜಗ ಸದಾ ಜಂಜಾಟಗಳ ಒತ್ತಡಗಳಿಂದ ಕೂಡಿದ ದೂರದ ಬೆಟ್ಟ ಬಿಸಿಯ ಬೇಗೆಗೆ ಧಗ ಧಗಿಸುತ್ತಿದೆ.

Tuesday, May 27, 2008

ಕಡಲ ತಡಿಯ ಕಲೆಗಳು


ನಮ್ಮೂರು ಗುಜ್ಜಾಡಿ ಕಡಲ ತಡಿಯ ಪುಟ್ಟ ಹಳ್ಳಿ .ಮಲೆನಾಡ ಮೈಸಿರಿಯೊಂದಿಗೆ ಸಮುದ್ರದ ಬೋರ್ಗರೆತದ ನಾದಕ್ಕೆ ಹೆಜ್ಜೆ ಹಾಕುತ್ತ ದಿನ ಪ್ರಾರಂಬಿಸುವ ಮುಗ್ದ ಪ್ರಕೃತಿ ರಮಣೀಯ ತಾಣ .ಪಾಣ ಕುಣಿತ,ಯಕ್ಷಗಾನ ಇಲ್ಲಿನ ಪ್ರಸಿದ್ದ ಕಲೆಗಳು.ಯಕ್ಷಗಾನ ಇತ್ಹೀಚಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ .ಅದನ್ನು ಸರಿಯಾದ ಚೌಕಟ್ಟಿನಲ್ಲಿಉಳಿಸಿ ಬೆಳೆಸಬೇಕಿದೆ .

ಯಕ್ಷಗಾನ ಕಡಲ ತಡಿಯಲ್ಲಿ ಹುಟ್ಟಿದ, ಕರ್ನಾಟಕದ ಅತ್ಯುತ್ತಮ ಶ್ರೇಷ್ಟ ಕಲೆ . ಭಾರತದ ಅನೇಕ ಇತಿಹಾಸಗಳನ್ನು ಹಾಸು ಹೊಕ್ಕಾಗಿ ಇಂದಿನ ಪೀಳಿಗೆಗೆ ಸಮರ್ಪಕವಾಗಿ ತೋರಿಸುವ ಸುಂದರ ಕಲೆ. ಭೂತ ಕಾಲದ ಇತಿಹಾಸವನ್ನು ವರ್ತಮಾನ ವನ್ನಾಗಿಸುವ ಸಮರ್ಥವಾದ ಜೀವಂತ ಪರದೆ . ಈ ಕಲೆಯ ಕಲಾಕಾರನು ತನ್ನ ಪಾತ್ರಗಳಿಗೆ ಜೀವಂತಿಕೆ ತಂದು ಕೊಡುವುದು ಸುಲಭದ ಮಾತಲ್ಲ.ತನ್ನ ಭಾವನೆಗಳಿಗೆ ಆಯಾ ಪತ್ರದ ಭಾವನೆಗಳನ್ನು ತುಂಬಿ ಎಲ್ಲರನ್ನು ರಂಜಿಸುವ ಜವಾಬ್ದಾರಿ ರಂಗಕರ್ಮಿಯದ್ದಾಗಿರುತ್ತದೆ.

ಪಾಣ ಕುಣಿತವೆನ್ನುವುದು ತುಂಬಾ ಪುರಾತನ ಕಾಲದಿಂದ ತುಳುನಾಡಿನಲ್ಲಿ ಸಂಪ್ರದಾಯ ಬದ್ದವಾಗಿ ಆಚರಿಸುವ ಪುರಾತನ ಕಲೆ.ಗ್ರಾಮ ದೇವರನ್ನು ಹೊಗಳುತ್ತಾ ,ದಕ್ಕೆಯ ಶಬ್ದಕ್ಕೆ ಕುಣಿಯುತ್ತ ಹೆಜ್ಜೆ ಹಾಕುವ ಪರಿ ಪಾಣ ಕುಣಿತದ ಸಂಪ್ರದಾಯ.ಪಾಣ ವೇಷ ದರಿಸಲು ಅವರದ್ದೇ ಆದ ಪಂಗಡವಿದೆ. ಅವರು ಅನೇಕ ಗ್ರಾಮ್ಯ ದೇವರುಗಳ ವೇಷ ದರಿಸಿ ,ದಕ್ಕೆಯ ಶಬ್ದಕ್ಕೆ ಅನುಸಾರವಾಗಿ ನರ್ತಿಸುತ್ತಾರೆ.ದೈವ ಮನೆಯ ವಾರ್ಷಿಕ ಹಬ್ಬದಂದು ರಾತ್ರಿ ಇದನ್ನು ಆಚರಿಸಲಾಗುವುದು.