Thursday, May 28, 2009

ಮಾತು ಕೇಳದ ಮನಸ್ಸು


ಮನಸ್ಸೇ ಹಾಗೆ ಆಸೆಗಳ ಆಶಾಕಿರಣಗಳ ಹಿಂದೆ ಓಡುವ ಬಿಸಿಲು ಕುದುರೆಯಂತೆ . ಆತ್ಮದ ತುಮುಲಥೆಯನ್ನು ಕೇಳದೆ ,ಅರಿಯದೆ , ವಿಚಾರಿಸದೆ ಬೇಕಾದದ್ದನ್ನು ಪಡೆದು ಜಯಿಸುತ್ತದೆ .ಅನೇಕ ದೂರಗಳನ್ನು ಕ್ರಮಿಸಿ ಬಂದ ಕವಲು ಹಾದಿಯನ್ನು ನೆನೆದು ಆದ ಅನಾಹುತಕ್ಕಾಗಿ ಮರುಗುತ್ತದೆ . ಆದದ್ದನ್ನೇ ನೆನೆದು ಕೊರಗಿ ತನ್ನನ್ನು ತಾನು ನಾಶ ಪಡಿಸಿಕೊಳ್ಳುವಂತೆ ಮನ ಮಾಡುತ್ತದೆ .ಕಡಿವಾಣವಿಲ್ಲದ ಮನಸ್ಸು ಮಾತು ಕೇಳುವುದೇ ?.ಆಗ ಮನಸ್ಸು ಮಾಡುವುದೇ ಆತ್ಮದ ಕೊಲೆ . ಮಾತು ಕೇಳದ ಮನಸ್ಸಿನ ಪರಮಾವಧಿ ಇದೆ ಅಲ್ಲವೇ ?.



ತಾಳ್ಮೆಯೆಂಬ ಕಡಿವಾಣದಿಂದ ಮಾತು ಕೇಳದ ಮನಸ್ಸನ್ನು ನಿಯಂತ್ರಿಸಬೇಕು.ಆತ್ಮವಿಶ್ವಾಸ ಮತ್ತು ತಾಳ್ಮೆ ಆತ್ಮವನ್ನು ಕೊಲ್ಲಲು ಬಿಡದು.ಒಂಟಿಯಾಗಿ ಬೆಳೆದ ಮನಸ್ಸು ಬಲು ಬೇಗನೆ ದುಡುಕಿ ಕೆಡುಕಿನ ಹಾಧಿ ಹಿಡಿಯುತ್ತದೆ . ಇಂಥಹ ಮನಸ್ಸು ಒತ್ತಡಗಳ , ಸೋಲಿನ ಹೊರೆಯನ್ನು ಸಹಿಸುವುದಿಲ್ಲ . ಸಹಿಸುವ ಮೊದಲೇ ತನ್ನ ನಾಶಕ್ಕಾಗಿ ಹೆಣಗುತ್ತಿರುತ್ತದೆ. ಆಗ ಆಗುವುದೇ ಆತ್ಮದ ಅಂತ್ಯ .

ಮನಸ್ಸು ನಾನಾ ಕಾರಣಗಳಿಂದ ಒಂಟಿತನ ಅನುಭವಿಸುತ್ತದೆ.ಈ ದಿನಗಳಲ್ಲಿ ಬಾಲ್ಯದಿಂದಲೇ ಅನೇಕ ಮಕ್ಕಳು ಒಂಟಿತನ ಅನುಭವಿಸಬೇಕಾಗುತ್ತದೆ. ಆಧುನಿಕತೆಯ ಜೀವನ ಶೈಲಿಯಿಂದ ಅನೇಕ ಕಂದಮ್ಮಗಳು ಪಾಲಕರ ಅಕ್ಕರೆಯ ಪೋಷಣೆಯಿಂದ ವಂಚಿತರಾಗುತ್ತಿದ್ದಾರೆ. ಬೆಳೆಯುವ ಸಿರಿಗೆ ಪ್ರೀತಿಯೆಂಬ ಹಾಲಿನ ,ಮಮತೆ ಎಂಬ ಜೆನೀನ ಆಸರೆಯ ಅಗತ್ಯವಿರುತ್ತದೆ.

No comments: