ಹೇಗಾಯಿತು ಮನುಜನ ಬದುಕು ಬರಡು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.
ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.
ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.
Wednesday, December 23, 2009
Monday, December 21, 2009
ಬಾಡಿ ಹೋದ ಬಳ್ಳಿ
ಸಂತೋಷವೆಂಬ ಸ್ನೇಹ ಬಳ್ಳಿ
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .
ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .
ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.
ಬಾಡಿತಿಂದು ಬದುಕ ತಳ್ಳಿ
ಚಿಗುರಲಾರದೆ ಈ ಭುವಿಯಲ್ಲಿ
ಮರೆಯಾಯಿತು ಆ ಮಣ್ಣಲ್ಲಿ .
ಮಿಂಚಿ ಮರೆಯಾದೆ ಎಲ್ಲಿ
ನೆನಪು ಮನದಲ್ಲಿ ಚೆಲ್ಲಿ
ಹೇಗೆ ಮರೆಯಲಿ ನಿನ್ನ ಬಾಳಲ್ಲಿ
ಮತ್ತೆ ಬಾ ಸ್ನೇಹದ ಬೆಳಕ ಚೆಲ್ಲಿ .
ನಮ್ಮ ಸ್ನೇಹದ ಗೂಡಲ್ಲಿ
ಸಂತಸದ ಹಕ್ಕಿ ನೀನೆಲ್ಲಿ
ಹಾರಿ ಭಾನ ಮರೆಯಲ್ಲಿ
ಲೀನವಾದೆಯ ನಕ್ಷತ್ರದ ರಾಶಿಯಲ್ಲಿ.
Subscribe to:
Posts (Atom)