ಹೇಗಾಯಿತು ಮನುಜನ ಬದುಕು ಬರಡು
ನೀತಿ ನಿಯಮವೆಂಬ ನಯನಗಳು ಕುರುಡು
ತೆರೆಸಲಾಗದು ದೂರ ಸಾಗಿದೆ ಮನವು
ವಿಕೃತ ಮನಕೆ ತೋರುವುದೇ ಜಗವು.
ಕೈ ಮೀರಿ ಸಾಗುತಿದೆ ಆಧುನಿಕವು
ಎಲ್ಲೇ ಮೀರಿ ಏರುತಿದೆ ಬಿಸಿಕಾವು
ಹೀಗೆ ಮುಂದುವರಿದರೆ ಕಾರುಬಾರು
ಮುಂದೆ ಆಗುವುದು ಜಗದ ಸಾವು.
ಇನ್ನೂ ಕೇಳುತಿಲ್ಲ ಭೂತಾಯಿಯ ಅಳುವು
ಕೇಳದಿನ್ನು ಅಜ್ನಾನದಿಂದಿಹ ಕಿವಿ ಕಿವುಡು
ಕೂಗಲು ಆಗದೋ ಕುಂದಿದೆ ಸ್ವರವು
ಅರಿತು ಬದುಕಿರೋ ಬರಡು ಆಗದು ಜಗವು.
Wednesday, December 23, 2009
Subscribe to:
Post Comments (Atom)
No comments:
Post a Comment